ದಿ.ನಗರ ಜಗನ್ನಾಥ ಶೆಟ್ಟಿ ದಶಮ ವರ್ಷದ ಸಂಸ್ಮರಣೆ, ಯಕ್ಷಗಾನ ಬಯಲಾಟ ಪ್ರದರ್ಶನ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಜನವರಿ 15 , 2014
|
ಬಡಗುತಿಟ್ಟಿನ ರಂಗಸ್ಥಳ ರಾಜ ಎಂಬ ಖ್ಯಾತಿಯ ಸವ್ಯಸಾಚಿ ಕಲಾವಿದ ನಗರ ಜಗನ್ನಾಥ ಶೆಟ್ಟಿಯವರು ನಮ್ಮನ್ನಗಲಿ ಇಂದಿಗೆ ವರ್ಷ ೧೦ ಸಂದಿದೆ. ಅವರ ಅಭಿಮಾನಿ ವರ್ಗದವರು ಸಂಸ್ಮರಣಾ ಸಮಿತಿ ರಚಿಸಿಕೊಂಡು ಇದೇ ಬರುವ ಫೆಬ್ರವರಿ 8ರ ಶನಿವಾರ ರಾತ್ರಿ ಕುಂದಾಪುರದಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಸಂಸ್ಮರಣಾ ಸಮಾರಂಭ ಮತ್ತು ಅವರು ದೀರ್ಘಕಾಲ ಸೇವೆ ಸಲ್ಲಿಸಿದ ಮೇಳಗಳಲ್ಲಿ ಒಂದಾದ ಶ್ರೀ ಪೆರ್ಡೂರು ಮೇಳದವರಿಂದ ಪೌರಾಣಿಕ ಪ್ರಸಂಗಗಳ ಪ್ರದರ್ಶನವಿರಿಕೊಂಡಿದ್ದಾರೆ. ನಗರದವರು ತೀರಿಕೊಂಡ ಹತ್ತನೇ ವರ್ಷದಲ್ಲಿ ಅವರನ್ನು ನೆನಪಿಸಿಕೊಂಡು ಕುಟುಂಬಕ್ಕೆ ಧನ ಸಹಾಯ ಮಾಡುವ ಉದ್ದೇಶದಿಂದ ಹುಟ್ಟಿಕೊಂಡ ಸಂಸ್ಮರಣಾ ಸಮಿತಿಯ ಕಾರ್ಯ ಶ್ಲಾಘನೀಯವಾಗಿದೆ.
|
|
|